ಸ್ಲಂನಲ್ಲಿ ?ಗನ್?
Posted date: 5/July/2010

      ಈಗಷ್ಟೆ ಮಹಾನಗರ ಪಾಲಿಕೆ ಚುನಾವಣೆ ಮುಗಿದಿದೆ. ಆದರೂ ನಗರದ  ಸ್ಲಂವೊಂದರಲ್ಲಿ ರಂಗಾಯಣ ರಘು ರವರಿಂದ ಬಿರುಸಿನ ಪ್ರಚಾರ ನಡೆದಿದೆ. ಈ ಪ್ರಚಾರದಲ್ಲಿ ತಲೀನರಾಗಿದ್ದ ರಂಗಾಯಣ ರಘು ರವರನ್ನು ನಾಯಕಿ ಮಲ್ಲಿಕಾ ಕಪೂರ್ ಸಂದರ್ಶನ ಮಾಡುತ್ತಾರೆ. ಈ ಸನ್ನಿವೇಶವನ್ನು ‘ಗನ್ ಚಿತ್ರಕ್ಕಾಗಿ ಓಕುಳಿಪುರಂ ಸ್ಲಂನಲ್ಲಿ ನಿರ್ದೇಶಕ ಹರೀಶರಾಜ್ ಚಿತ್ರೀಕರಿಸಿಕೊಂಡರು.
      ‘ಕಲಾಕಾರ್ ಚಿತ್ರದ ನಂತರ ಹರೀಶ್‌ರಾಜ್ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರ ಕೂಡ ವಿಭಿನ್ನ ಕಥೆಯನ್ನೊಳಗೊಂಡಿದ್ದು ನೋಡುಗರ ಮೆಚ್ಚುಗೆ ಪಾತ್ರವಾಗಲಿದೆ ಎಂದು ಹರೀಶ್‌ರಾಜ್ ತಿಳಿಸಿದ್ದಾರೆ.
       ಹರೀಶ್‌ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುರಳಿ ಅವರೊಂದಿಗೆ ಹರೀಶ್‌ರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಚ್.ಎಮ್.ರಾಮಚಂದ್ರ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ರಾನಿ ರಾಫ಼ೆಲ್ ಅವರ ಸಂಗೀತವಿರುವ ‘ಗನ್ ಚಿತ್ರದ ತಾರಾಬಳಗದಲ್ಲಿ ಹರೀಶ್‌ರಾಜ್, ಮಲ್ಲಿಕಾಕಪೂರ್, ರಂಗಾಯಣರಘು ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed